ವಕೀಲ ಈರನಗೌಡ ಹತ್ಯೆಗೆ ಖಂಡನೆ

ವಕೀಲ ಈರನಗೌಡ ಹತ್ಯೆಗೆ ಖಂಡನೆ

ಜಗಳೂರು, ಡಿ. 8 – ಕಲಬುರಗಿ ಜಿಲ್ಲೆಯ ವಕೀಲ ಈರನಗೌಡ ಪಾಟೀಲ್ ಅವರ ಬರ್ಬರ ಹತ್ಯೆ ಖಂಡಿಸಿ, ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ತಹಶೀ ಲ್ದಾರ್ ಅವರಿಗೆ ಮನವಿ ಸಲ್ಲಿಸಿದರು‌.

ನ್ಯಾಯವಾದಿಗಳ ಸಂಘದ  ಅಧ್ಯಕ್ಷ ಇ. ಓಂಕಾರೇಶ್ವರ ಮಾತನಾಡಿ, ಕಲಬುರಗಿ ಜಿಲ್ಲೆಯ ನ್ಯಾಯವಾದಿಗಳ ಸಂಘದ ಸದಸ್ಯ ಈರನಗೌಡ ಪಾಟೀಲ್ ಅವರನ್ನು ಮೊನ್ನೆ ದುಷ್ಕರ್ಮಿಗಳು ಹಾಡುಹಗಲೇ ಹಲ್ಲೆ ಮಾಡಿ, ಹತ್ಯೆ ನಡೆಸಿರುವುದು ವಕೀಲರಿಗೆ ಕಾನೂನು ಭದ್ರತೆಯಿಲ್ಲದೆ ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ. ಹತ್ಯೆಗೈದ ದುಷ್ಕರ್ಮಿಗಳ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ನ್ಯಾಯವಾದಿಗಳ ಸಂಘದ ಪ್ರಧಾನ‌ ಕಾರ್ಯದರ್ಶಿ ಕೆ.ವಿ. ರುದ್ರೇಶಿ, ಖಜಾಂಚಿ ಸಿ. ಬಸವರಾಜ್, ಪದಾಧಿಕಾರಿಗಳಾದ ಡಿ.ವಿ. ನಾಗಪ್ಪ, ಆರ್‌. ಓಬಳೇಶ್, ಸುನಿಲ್ ಕುಮಾರ್, ಹೆಚ್. ಬಸವರಾಜ್, ಅಶೋಕ್ ಕುಮಾರ್, ತಿಪ್ಪೇಸ್ವಾಮಿ, ಭೂಪತಿ, ಶ್ರೀನಿವಾಸ್ ಮುಂತಾದ ವರು ಇದ್ದರು.

error: Content is protected !!