ಹರಿಹರ, ಡಿ.8- ನಗರಸಭೆ ವತಿಯಿಂದ 15 ನೇ ಹಣಕಾಸಿನ ಅಡಿಯಲ್ಲಿ 9, 13, 14, 22 ಮತ್ತು 23 ನೇ ವಾರ್ಡಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಯ ಗುಣಮಟ್ಟವನ್ನು ಜಿಲ್ಲಾ ಯೋಜನಾಧಿಕಾರಿ ಮಹಾಂತೇಶ್ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಕೆಲವು ಸಣ್ಣ ಪುಟ್ಟ ವ್ಯತ್ಯಾಸವನ್ನು ಆದಷ್ಟು ಬೇಗ ಸರಿಪಡಿಸುವಂತೆ ಪೌರಾಯುಕ್ತ ಐಗೂರು ಬಸವರಾಜ್ ಮತ್ತು ಎಇಇ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭೆ ಇಂಜಿನಿಯರ್ ಮಂಜುಳಾ, ಗುತ್ತಿಗೆದಾರರಾದ ಸುಭಾಷ್, ಜಗದೀಶ್ ರಾಘವೇಂದ್ರ , ಹೆಚ್.ಎಲ್. ರಾಘವೇಂದ್ರ ಇತರರು ಹಾಜರಿದ್ದರು.
ಹರಿಹರ: ನಗರಸಭೆ ಕಾಮಗಾರಿ ಪರಿಶೀಲನೆ
![10 hrr kamagaari 09.12.2023 ಹರಿಹರ: ನಗರಸಭೆ ಕಾಮಗಾರಿ ಪರಿಶೀಲನೆ](https://janathavani.com/wp-content/uploads/2023/12/10-hrr-kamagaari-09.12.2023-860x499.jpg)