ಚಳ್ಳಕೆರೆಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಚಳ್ಳಕೆರೆಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಚಳ್ಳಕೆರೆ, ಡಿ. 8- ಇಲ್ಲಿನ ಕೃಷ್ಣರಾಜೇಂದ್ರ ಶಾಖಾ ಗ್ರಂಥಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.

ಮೈತ್ರಿ ದ್ಯಾಮಯ್ಯ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಮಾತನಾಡಿ, ಲೈಬ್ರರಿ ಓದುಗರು ಬಾಬಾ ಸಾಹೇಬ್‌ರ ಪುಸ್ತಕಗಳನ್ನು ಓದಿ ಜ್ಞಾನವಂತರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಗ್ರಂಥಾಲಯ ಅಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಮಾತನಾಡಿ, ಅತಿ ಹೆಚ್ಚು ಓದುಗರು ಬಡವರಾಗಿದ್ದು, ಲೈಬ್ರರಿಗೆ ಬಂದು ಬುದ್ಧಿವಂತರಾಗಿ, ತಂದೆ ತಾಯಿಗೆ ಹೆಸರು ತರಬೇಕು ಎಂದು ತಿಳಿಸಿದರು. ತಾಲ್ಲೂಕು ಲೈಬ್ರರಿ ಅಧಿಕಾರಿ ಡಿ. ತಿಮ್ಮರಾಯ, ಪತ್ರಕರ್ತ ಟಿ.ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಇ. ವೀರಭದ್ರಪ್ಪ ಚಾಳೂರು, ಸಿಬ್ಬಂದಿ ವರ್ಗದವರಾದ ಮಾರುತಿ, ರೂಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!