ಹರಿಹರದಲ್ಲಿ ಇಂದು ಆರೋಗ್ಯ ತಪಾಸಣೆ ಶಿಬಿರ

ಹರಿಹರದಲ್ಲಿ ಇಂದು  ಆರೋಗ್ಯ ತಪಾಸಣೆ ಶಿಬಿರ

ಹರಿಹರ, ಡಿ. 2 -ನಗರದ ಅಮರಾವತಿ ಕೆ.ಹೆಚ್.ಬಿ. ಕಾಲೋನಿ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ಹಾಗೂ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರೀತಿ ಆರೈಕೆ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಾಳೆ ದಿನಾಂಕ 3 ರಂದು ಭಾನುವಾರ ಬೆಳಿಗ್ಗೆ  9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಜಿ.ಕೆ. ಮಲ್ಲಿಕಾರ್ಜುನ ಮತ್ತು ಕಾರ್ಯದರ್ಶಿ ವೀರೇಶ್ ಯಾದವಾಡ ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೊಸ ಕೋರ್ಟ್ ಹಿಂಭಾಗ ಚೌಡಮ್ಮ ದೇವಸ್ಥಾನ ಹತ್ತಿರ ಸ್ಥಳೀಯ ನಗರಸಭೆ ಸದಸ್ಯರಾದ ದಿನೇಶ್ ಬಾಬು ಅವರಿಂದ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಪರಶುರಾಮ ಗೌಳಿ, ರೇವಣಸಿದ್ದಪ್ಪ ಪಿ.ವಿ. ಶಿವಪ್ರಕಾಶ್ ಸ್ವಾಮಿ ಇತರರು ಹಾಜರಿದ್ದರು. 

error: Content is protected !!