ದಾವಣಗೆರೆ, ಡಿ.6- ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ ಮಹಾತ್ಮಗಾಂಧಿ ಸ್ಮರಣಾರ್ಥ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ – 2023ರಲ್ಲಿ ನಗರದ ಎಂ.ಎ.ಎಸ್. ಶಾಲೆಯ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ಕುಮಟೆ ವಿಭಾಗದಲ್ಲಿ ಎಂ.ಎ.ಎಸ್. ಶಾಲೆಯ ಯಶವಂತ್ ವೈ.ಎಸ್. ಪ್ರಥಮ ಸ್ಥಾನ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪುರುಷೋತ್ತಮ್ ವೈ.ಎಸ್. ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಲಾವಣ್ಯ ಜೆ. ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಕಿರಣ ಎಲ್.ಕೆ. ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಹೇಮಂತ್ ಕೆ.ಎಸ್. ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಕರಾಟೆ ತರಬೇತುದಾರ ಎಂ. ರಾಜು ತಿಳಿಸಿದ್ದಾರೆ.
ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಎಂ.ಎ.ಎಸ್. ಶಾಲೆಯ ಮಕ್ಕಳ ಸಾಧನೆ
![27 karate mas 07.12.2023 ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಎಂ.ಎ.ಎಸ್. ಶಾಲೆಯ ಮಕ್ಕಳ ಸಾಧನೆ](https://janathavani.com/wp-content/uploads/2023/12/27-karate-mas-07.12.2023-860x597.jpg)