ನಾಳೆ ಕಲಾವಿದೆ ಸಹನಾ ರಂಗ ಪ್ರವೇಶ

ನಾಳೆ ಕಲಾವಿದೆ ಸಹನಾ ರಂಗ ಪ್ರವೇಶ

ದಾವಣಗೆರೆ,ನ.30 ನಗರದ ಕುವೆಂಪು ಕನ್ನಡ ಭವನದಲ್ಲಿ ನೃತ್ಯ ಕಲಾವಿದೆ ಕು. ಬಿ.ಸಹನಾ  ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಡಿಸೆಂಬರ್ 2ರಂದು ಜರುಗಲಿದೆ.

ಅಧ್ಯಕ್ಷತೆಯನ್ನು ಡಾ. ಎಸ್.ಎಸ್.ಎನ್.ಪಿ.ಎಸ್. ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಜಯಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಬೆಂಗಳೂರಿನ ಬಿಎನ್ಎಂ ತಾಂತ್ರಿಕ ಕಾಲೇಜಿನ ಪ್ರೊ. ಡಾ.ಅಮಿತ್ ಶೇಖರ್,  ಡಾ. ಎಸ್.ಎಸ್.ಎನ್.ಪಿ.ಎಸ್. ಶಾಲೆ ಮಾಜಿ ಪ್ರಾಂಶುಪಾಲರಾದ ಡಾ.ಪ್ರೀತಿ ಸಿಂಗ್, ಸಾಗರದ ನಾಟ್ಯ ತರಂಗ ಟ್ರಸ್ಟ್‌ನ ವಿದ್ವಾನ್ ಜಿ.ಬಿ.ಜನಾರ್ದನ್ ಮತ್ತು ಶ್ರೀಮತಿ ವರದಾಂಬಿಕ ಜನಾರ್ದನ್ ಮತ್ತು ಬಿಐಇಟಿ ಪ್ರಾಂಶುಪಾಲ ಹೆಚ್.ಬಿ.ಅರವಿಂದ್ ಆಗಮಿಸುವರು.

ಈ ರಂಗಪ್ರವೇಶ ಕಾರ್ಯಕ್ರಮದಲ್ಲಿ ನರ್ತಿಸುವ ಎಲ್ಲ ನೃತ್ಯ ಬಂಧುಗಳ ಸಾಹಿತ್ಯ, ರಚನೆ ಮತ್ತು ಸಂಗೀತ ಸಂಯೋಜನೆಯನ್ನು ಗುರುಗಳಾದ ರಾಜಗೋಪಾಲ ಭಾಗವತ ಮತ್ತು ಪೂರ್ಣಿಮಾ ಭಾಗವತರು  ಮಾಡಿರುತ್ತಾರೆ.

ಕಲಾವಿದೆ ಸಹನಾ ಪರಿಚಯ: ವರ್ತಕರಾದ ಬಸವರಾಜ ಬನ್ನೆಟ್ಟಿ ಮತ್ತು ರೇಣುಕ ದಂಪತಿಯ ಪುತ್ರಿ ಸಹನಾ, ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾಶಾಲೆಯಲ್ಲಿ ತಮ್ಮ 10ನೇ ವಯಸ್ಸಿನಿಂದಲೇ  ಗುರುಗಳಾದ  ವಿದುಷಿ ಶ್ರೀಮತಿ  ಪೂರ್ಣಿಮಾ ಭಾಗವತರ   ಶಿಷ್ಯೆಯಾಗಿ ನೃತ್ಯ ಅಭ್ಯಾಸ ಮಾಡಿದ್ದಾರೆ. ಅಲ್ಲದೇ ವಿದ್ವಾನ್ ರಾಜಗೋಪಾಲ ಭಾಗವತರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ  ಅಭ್ಯಾಸ ಮಾಡಿದ್ದಾರೆ.

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಭರತನಾಟ್ಯ ಪರೀಕ್ಷೆ ಮತ್ತು    ಸಂಗೀತ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ   ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಮೈಸೂರು ದಸರಾ ಸೇರಿದಂತೆ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡಿದ್ದಾರೆ.  ಸಸ್ಯ ಶಾಸ್ತ್ರ ಅಧ್ಯಯನ ಮಾಡಿ ಎಂ.ಎಸ್.ಸಿ ಪದವಿ ಪಡೆದಿರುವ ಸಹನಾ, ನಗರದ ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಸಿಬಿಎಸ್‌ಇ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

error: Content is protected !!