ಮಹಿಳೆಯ ಬಂಗಾರದ ಸರ ಕಿತ್ತು ಪರಾರಿ

ದಾವಣಗೆರೆ, ನ. 29- ತೋಟದಲ್ಲಿ ಬಾಳೆ ಎಲೆ ಕೊಡಲು ಹೋದಾಗ ಯುವಕರಿಬ್ಬರು ಮಹಿಳೆಯ 20 ಗ್ರಾಂ. ತೂಕದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ಘಟನೆ  ಹೊಸ ಬೆಳವನೂರು ಗ್ರಾಮದಲ್ಲಿ ನಡೆದಿದೆ. ವೆಂಕಟರಮಣಮ್ಮ ತಮ್ಮ ಮನೆಯ ಮುಂದಿನ ತೋಟದಲ್ಲಿದ್ದ ಬಾಳೆ ಎಲೆಗಳನ್ನು ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುವವರು ತೆಗೆದು ಕೊಂಡು ಹೋಗುತ್ತಿದ್ದರು. ಅಂತೆಯೇ ಮಂಗಳ ವಾರ ಇಬ್ಬರು ಯುವಕರು ತಮಗೆ ಬಾಳೆ ಎಲೆ ಬೇಕೆಂದು ಕೇಳಿದಾಗ, ವೆಂಕಟರಮಣಮ್ಮ ಕೊಡಲು ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಯುವಕರು ಕೊರಳಲ್ಲಿದ್ದ ಬಂಗಾರದ ಸರ ಕಿತ್ತು ಪರಾರಿಯಾಗಿದ್ದಾರೆ. ಈ ಕುರಿತು ಮಹಿಳೆ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!