ರಾಣೇಬೆನ್ನೂರು, ನ.28- ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿರುವ ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲು 2023-24ನೇ ಸಾಲಿನ ಆತ್ಮ ಯೋಜನೆಯಲ್ಲಿ ಅರ್ಜಿ ಆಹ್ವಾನಿಸಿದ್ದು, ಸಾಧನೆ ಮಾಡಿದ ರೈತರು ಡಿಸೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಹಾಯಕ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ತಿಳಿಸಿದ್ದಾರೆ. ಸಮಗ್ರ ಕೃಷಿ ಪದ್ದತಿ, ಸಾವಯವ ಕೃಷಿ ಪದ್ದತಿ, ವೈಜ್ಞಾನಿಕ ಯಂತ್ರೋಪಕ ರಣದ ಕೃಷಿಯಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ರೈತರಿಗೆ ತಲಾ ಒಂದರಂತೆ ಮೂರು, ವೈಜ್ಞಾನಿಕ ತೋಟಗಾರಿಕೆ, ವೈಜ್ಞಾನಿಕ ಹೈನುಗಾರಿಕೆ ಎರಡು ಸೇರಿ ಒಟ್ಟು 5 ಪ್ರಶಸ್ತಿ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ 8217484681, 88845292 78, 8867865916 ಸಂಪರ್ಕಿಸಲು ತಿಳಿಸಲಾಗಿದೆ.
July 3, 2024