ನಗರದಲ್ಲಿ ಇಂದು ಪಾಲಿಕೆಯ ರಾಜ್ಯೋತ್ಸವದ ಸಮಾರೋಪ

ಮಹಾನಗರ ಪಾಲಿಕೆ ವತಿಯಿಂದ ನಿನ್ನೆ ಆರಂಭಗೊಂಡಿರುವ ಮೂರು ದಿನಗಳ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಕೊನೆ ದಿನವಾದ ಇಂದು ಸಂಜೆ 5.30ಕ್ಕೆ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ  ಸಮಾರೋಪ ಸಮಾರಂಭ ನಡೆಯಲಿದೆ. 

ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಹಾಪೌರರಾದ ವಿನಾಯಕ ಬಿ.ಹೆಚ್‌. ಪೈಲ್ವಾನ್‌ ವಹಿಸುವರು. ಸಾಹಿತಿ ಡಾ. ರಂಜಾನ್‌ ದರ್ಗಾ, ಧರ್ಮಗುರುಗಳಾದ ಶ್ರೀ ಜೈನಿ ಉಸ್ತಾದ್‌ ಅವರುಗಳು ವಿಶೇಷ ಉಪನ್ಯಾಸ ನೀಡುವರು.

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌, ಉಪ ಮಹಾಪೌರರಾದ ಶ್ರೀಮತಿ ಯಶೋಧ ಯಗ್ಗಪ್ಪ, ಬಿ.ಎನ್‌. ಮಲ್ಲೇಶ್‌, ಇ.ಎಂ. ಮಂಜುನಾಥ, ಕೆ.ಜಿ. ಶಿವಕುಮಾರ್‌, ಶ್ರೀಮತಿ ಶುಭಮಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪಾಲಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಅಬ್ದುಲ್‌ ಲತೀಫ್‌, ಉದಯ್‌ಕುಮಾರ್‌, ಶ್ರೀಮತಿ ಮೀನಾಕ್ಷಿ ಜಗದೀಶ್‌, ಅಹ್ಮದ್ ಕಬೀರ್‌ಖಾನ್‌, ಕೆ. ಪ್ರಸನ್ನಕುಮಾರ್‌, ಬಿ.ಹೆಚ್‌. ವೀರಭದ್ರಪ್ಪ, ವೀರೇಶ್‌ ಎಂ. ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

error: Content is protected !!