ಕುಕ್ಕುವಾಡದಲ್ಲಿ ಇಂದು ಆಂಜನೇಯ ಸೌಹಾರ್ದ ಸಹಕಾರಿಯ ರಜತ ಮಹೋತ್ಸವ

ದಾವಣಗೆರೆ, ನ.26- ಕುಕ್ಕುವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ಸಂಘ ನಿಯಮಿತದ ರಜತ ಮಹೋತ್ಸವ ನಾಳೆ ದಿನಾಂಕ 27ರ ಸೋಮವಾರ ಹೊಸ ಕೊಳೇನಹಳ್ಳಿ ರಸ್ತೆಯ ಶ್ರೀ ಗದ್ದಿಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು  ಸಹಕಾರಿ ಸಂಘದ ಅಧ್ಯಕ್ಷ ಜಿ.ಎಂ. ರುದ್ರಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12 ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅತ್ತಿಕಟ್ಟೆ ನಂದಿಗುಡಿ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ ಎಂದರು.

ಕೇಂದ್ರ ಕಛೇರಿ ಕಟ್ಟಡವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ವಾಣಿಜ್ಯ ಮಳಿಗೆಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ, ವಸತಿ ಗೃಹಗಳನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಸೇಫ್ ಲಾಕರ್, ಆಡಳಿತ ಸಭಾಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಭಾಂಗಣಗಳನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಲಿದ್ದಾರೆ. ಎರೆಹುಳು ಗೊಬ್ಬರ ಲೋಕಾರ್ಪಣೆಯನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾಡಲಿದ್ದಾರೆ.

ಇದೇ ವೇಳೆ ಸಂಘದ ಸ್ಮರಣ ಸಂಚಿಕೆ ಹಾಗೂ ವೆಬ್‌ಸೈಟ್ ಬಿಡುಗಡೆ ನಡೆಯಲಿದೆ. ರಸಮಂಜರಿ ಕಾರ್ಯಕ್ರಮವಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಳೇನಹಳ್ಳಿ ಶರಣಪ್ಪ, ಪ್ರದೀಪ್ ಇಂಜಿನಿಯಯರ್, ಯಮುನಪ್ಪ ಇದ್ದರು.

error: Content is protected !!