ಮಲೇಬೆನ್ನೂರು, ನ.22- ದಿಬ್ಬದಹಳ್ಳಿ ಗ್ರಾಮದಲ್ಲಿ ಗುಳ್ಳಮ್ಮ, ದುರ್ಗಮ್ಮದೇವಿ ದೇವ ಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ಗೋಪುರಕ್ಕೆ ಕಳಸಾರೋಹಣ ಮತ್ತು ಗುಳ್ಳಮ್ಮ, ದುರ್ಗಮ್ಮ ದೇವತೆಗಳ ನೂತನ ಶಿಲಾಮೂರ್ತಿಗಳ ಪ್ರತಿ ಷ್ಠಾಪನೆ ಬುಧವಾರ ಸಂಭ್ರಮದಿಂದ ಜರುಗಿತು.
ಶಾಸಕ ಬಿ.ಪಿ.ಹರೀಶ್, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿದೇವಿ ಮಂಜುನಾಥ್, ಗ್ರಾ.ಪಂ. ಸದಸ್ಯ ಓಂಕಾರಪ್ಪ, ಮಲೇಬೆನ್ನೂರಿನ ತಳಸದ ಬಸವರಾಜ್, ಓ.ಜಿ.ರುದ್ರಗೌಡ್ರು, ಕೆ.ಜಿ.ಪರಮೇಶ್ವರಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.