ದಾವಣಗೆರೆ : ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಇಂದು ಚಿಂತನೆ ಮತ್ತು ಸಂವಾದವನ್ನು ನಗರದ ಎಂ.ಸಿ.ಸಿ.`ಬಿ’ ಬ್ಲಾಕ್ 3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ (ಮಾಮಾಸ್ ಜಾಯಿಂಟ್ ರಸ್ತೆ) ಯಲ್ಲಿರುವ ಕರುಣಾ ಜೀವ ಕಲ್ಯಾಣ ಟ್ರಸ್ಟ್ನಲ್ಲಿ ಇಂದು ಸಂಜೆ 6 ರಿಂದ 7ರವರೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ `ಗಾಂಧಿ ಚಿಂತನೆಗಳು’ ವಿಷಯ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಜಿ.ಡಿ. ರಾಘವನ್ ಚಿಂತನೆ ನಡೆಸುವರು.
ಚಿಂತನೆ ಮತ್ತು ಸಂವಾದದಲ್ಲಿ ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸಗೂರು, ಮಲ್ಲಾಬಾದಿ ಬಸವರಾಜ್, ಶಿವನಕೆರೆ ಬಸವಲಿಂಗಪ್ಪ, ಆವರಗೆರೆ ರುದ್ರಮುನಿ ಭಾಗವಹಿಸುವರು.