ಮುರುಘಾ ಶ್ರೀಗಳ ಬಿಡುಗಡೆ ನಿರೀಕ್ಷೆ ನಗರದಲ್ಲಿ ಸಂಭ್ರಮಾಚರಣೆ

ಮುರುಘಾ ಶ್ರೀಗಳ ಬಿಡುಗಡೆ ನಿರೀಕ್ಷೆ ನಗರದಲ್ಲಿ ಸಂಭ್ರಮಾಚರಣೆ

ದಾವಣಗೆರೆ, ನ. 15 – ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಶ್ರೀ ಶಿವಮೂರ್ತಿ ಮುರುಘಾ ಶರಣರು ನಾಳೆ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದ ರಾಜ್ ಅವರ ನೇತೃತ್ವದಲ್ಲಿ ಅಭಿಮಾನಿಗ ಳು, ಬಸವಣ್ಣನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.

ಈ ವೇಳೆ ಮಾತನಾಡಿದ ಬಾಡದ ಆನಂದರಾಜ್, ಶೋಷಿತರ ಗಟ್ಟಿ ಧ್ವನಿಯಾಗಿದ್ದ ಮುರುಘಾ ಶ್ರೀಗಳನ್ನು ಷ್ಯಡ್ಯಂತ್ರದಿಂದ ಜೈಲಿಗೆ ಕಳುಹಿಸಲಾಗಿತ್ತು. ನಾಳೆ ಬಿಡುಗಡೆ ನಿರೀಕ್ಷೆ ಎಲ್ಲರಿಗೂ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಚಳುವಳಿಯ ಟಿ.ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಅಂಗವಿಕಲರ ಸಂಘದ ಅಧ್ಯಕ್ಷ ಧನ್ಯಕುಮಾರ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಹನುಮೇಗೌಡ, ಕೊರಚ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ, ಕರವೇ ಸೋಮಶೇಖರ್, ಮಧುರ ಭಕ್ತಿ ಭವನ ಕೊಟ್ರೇಶ್ ಇನ್ನೂ ಮುಂತಾದವರಿದ್ದರು.

error: Content is protected !!