ರಾಣೇಬೆನ್ನೂರು, ನ.13 – ಹಾನಗಲ್ಲ ಪಟ್ಟಣದಲ್ಲಿ ವಿಜಯದಶಮಿ ಯಂದು ನಡೆದ ಘಟನೆಯೊಂದರಲ್ಲಿ ಪೊಲೀಸರು ಎಫ್ಐಆರ್ ನಲ್ಲಿ ಪತ್ರಕರ್ತ ಗಿರೀಶ್ ದೇಶಪಾಂಡೆ ಹೆಸರನ್ನು ಸೇರಿಸಿರುವುದು ದುರಂತ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ರವೀಂದ್ರಗೌಡ ಎಫ್. ಪಾಟೀಲ ಹೇಳಿ ದ್ದಾರೆ. ಗಿರೀಶ್ ಹೆಸರನ್ನು ಪ್ರಕರಣ ದಿಂದ ಕೈಬಿಡದಿದ್ದರೆ ಇದೇ ದಿನಾಂಕ 20 ರ ಸೋಮವಾರ ಕ.ರಾ.ರೈ. ಸಂಘಟನೆ ಯಿಂದ ದಾವಣಗೆರೆ ಪಿ.ಬಿ. ರಸ್ತೆಯಲ್ಲಿ ರುವ ಗಾಂಧಿ ಸರ್ಕಲ್ನಿಂದ ಐ.ಜಿ.ಪಿ. ಕಛೇರಿಗೆ ಪಾದಯಾತ್ರೆಯ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವು ದೆಂದು ಅವರು ತಿಳಿಸಿದ್ದಾರೆ.
July 24, 2024