ಹೊನ್ನಾಳಿ, ನ.13- ಹೊನ್ನಾಳಿ ಸರ್ವರ್ಕೇರಿ ಭಾಗದಲ್ಲಿರುವ ಪೇಪರ್ ಕಪ್ ಮತ್ತು ಪೇಪರ್ಪ್ಲೇಟ್ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿಯಿಂದ ಲಕ್ಷಾಂತರ ರೂ. ಗಳ ಮೌಲ್ಯದ ಪೇಪರ್ ಕಪ್ ಮತ್ತು ಪೇಪರ್ ಪ್ಲೇಟ್, ತಯಾರಿಕಾ ಘಟಕದ ಯಂತ್ರಗಳ (ಮಿಷನ್) ಬಿಡಿಭಾಗಗಳು ಸುಟ್ಟುಹೋಗಿವೆ.
ಶ್ರೀ ಕಾಳಿಕಾಂಬ ಎಂಟರ್ಪ್ರೈಸಸ್ನ ಪೇಪರ್ ಕಪ್ ಮತ್ತು ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ ನಿನ್ನೆ ದೀಪಾವಳಿ ಹಬ್ಬದ ಅಮಾವಾಸ್ಯೆಯ ಲಕ್ಷ್ಮಿ ಪೂಜೆ ಮಾಡಿದ ಮಾಲೀಕರಾದ ದುರ್ಗಿಗುಡಿ 3ನೇ ಕ್ರಾಸ್ನ ವಾಸಿ ಬಿ.ಟಿ.ಮಮತ ಕೋಂ ಎಂ.ರಾಜಪ್ಪ ಮನೆಗೆ ಹೋದ ಸಂದರ್ಭದಲ್ಲಿ ಈ ದುರಂತ ನಡೆದಿದೆ.
ಪೇಪರ್ ಕಪ್ ಮತ್ತು ಪೇಪರ್ ಪ್ಲೇಟ್ ಯಂತ್ರ ಮತ್ತು ಬಿಡಿಭಾಗಗಳು, ಕಚ್ಚಾ ಸಾಮಗ್ರಿಗಳಾದ ಪೇಪರ್ ಬಂಡಲ್, ಪೇಪರ್ ರೋಲ್, ಖಾಲಿ ಬಾಕ್ಸ್ಗಳು, ಕಂಪ್ಯೂಟರ್, ಪ್ಲಾಸ್ಟಿಕ್ ಕವರ್ಗಳು, ಪೀಠೋಪಕರಣಗಳು ಹಾಗೂ ಮಾರಾಟ ಮಾಡಲು ತಯಾರಾಗಿದ್ದ ಸಿದ್ಧಪಡಿಸಿದ ಕಪ್ಗಳು ಮತ್ತು ಪ್ಲೇಟ್ಗಳು ಬೆಂಕಿಯಿಂದ ಸುಟ್ಟುಹೋಗಿವೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.