ದಾವಣಗೆರೆ, ನ. 12- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿರಮಗೊಂಡನಹಳ್ಳಿಯ ಶ್ರೀ ಉಡಸಲಮ್ಮ ದೇವಿ ದೇವಸ್ಥಾನದ ನೂತನ ಕಟ್ಟಡದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1 ಲಕ್ಷ ಡಿಡಿ ಯನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕ ಮಾರುತಿ ಪಾಟೀಲ್, ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಜೆ. ಉಮೇಶ್, ಶ್ರೀ ಚನ್ನಬಸವೇಶ್ವರ ಕಮಿಟಿ ಅಧ್ಯಕ್ಷ ಎ. ವಸಂತ್ ಕುಮಾರ್, ಗ್ರಾಮದ ಮುಖಂಡರುಗಳಾದ ಕೆ. ಶಿವಮೂರ್ತಿ, ಡಿ.ಎಮ್. ವೀರೇಂದ್ರ ಪಾಟೀಲ್, ಎನ್. ನಾಗರಾಜಪ್ಪ, ಎ.ಎಚ್. ಚನ್ನಬಸಪ್ಪ, ಜಿ.ಎ. ಮಂಜುನಾಥ್, ಆರ್. ದಿನೇಶ್, ಎಸ್.ಕೆ. ಮಾಲತೇಶ್, ಷಣ್ಮುಖಪ್ಪ ಹರೀಶ್, ಮಂಜುನಾಥ್, ವೆಂಕಟೇಶ್, ಸುರೇಶ್ ಬಾಬು, ಚನ್ನಬಸಪ್ಪ ಎ.ಪಿ. ರುದ್ರಯ್ಯ, ಜಯಮ್ಮ, ಉಷಾ, ಸ್ವಪ್ನ, ಮಂಜುಳಾ, ರೋಜಾ ಉಪಸ್ಥಿತರಿದ್ದರು.