ಮಲೇಬೆನ್ನೂರಿನಲ್ಲಿ ಪಟಾಕಿ ಅಂಗಡಿ ಸ್ಥಳ ನಿಗದಿ, ಪರಿಶೀಲನೆ

ಮಲೇಬೆನ್ನೂರಿನಲ್ಲಿ ಪಟಾಕಿ ಅಂಗಡಿ ಸ್ಥಳ ನಿಗದಿ, ಪರಿಶೀಲನೆ

ಮಲೇಬೆನ್ನೂರು, ನ.10- ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಅಂಗಡಿ ತೆರೆಯಲು ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ ಜಾಗವನ್ನು ನಿಗದಿ ಮಾಡಲಾಗಿದೆ.  ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಪುರಸಭೆಯ ಶಿವರಾಜ್, ಅವಿನಾಶ್, ಪೊಲೀಸ್ ಠಾಣೆಯ ಮಲ್ಲಿಕಾರ್ಜುನ್ ಮತ್ತು ಅಗ್ನಿಶಾಮಕ ದಳದ ಸಂಜೀವ್ ಕುಮಾರ್ ಅವರನ್ನು ಒಳಗೊಂಡ ವಿಶೇಷ ಸರ್ವೇಕ್ಷಣಾ ತಂಡವನ್ನು ರಚಿಸಿ, ಮಳಿಗೆಗಳು ಪ್ರಾರಂಭವಾದ ದಿನದಿಂದ ಮುಕ್ತಾಯಗೊಳ್ಳುವವರೆಗೂ ಖುದ್ದು ಹಾಜರಿದ್ದು, ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸುವಂತೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಪಿಎಸ್‌ಐ ಪ್ರಭು ಕೆಳಗಿನಮನಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಅವರು ಗುರುವಾರ ಪಟಾಕಿ ಅಂಗಡಿ ತೆರೆಯುವ ನೀರಾವರಿ ಇಲಾಖೆಯ ಮೈದಾನವನ್ನು ಪರಿಶೀಲಿಸಿದರು.

error: Content is protected !!