ನಂದಿತಾವರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹೇಮಾವತಿ

ನಂದಿತಾವರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹೇಮಾವತಿ

ಮಲೇಬೆನ್ನೂರು, ನ. 9 – ನಂದಿತಾವರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಪಿ. ಹೇಮಾವತಿ ವಿಜಯಕುಮಾರ್ ಮತ್ತು ಉಪಾಧ್ಯಕ್ಷರಾಗಿ ಪಿ.ಎಸ್. ದೇವೇಂದ್ರಪ್ಪ ಗುರುವಾರ ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ಸಂಘದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು ಸಂಘದ ನಿರ್ದೇಶಕ ಎಂ.ಬಿ. ಶಿವಮೂರ್ತಯ್ಯ, ವೈ. ಸುರೇಶ್, ಎಸ್.ಬಿ. ಪಾಟೀಲ್, ಎನ್.ಕೆ. ನಾಗರಾಜ್, ಕೆ.ಜಿ. ಬಸವರಾಜ್, ಭೋವಿ ರಾಮಪ್ಪ, ಟಿ.ಎಸ್. ಬಸವರಾಜ್, ಎಂ. ಸತ್ಯನಾರಾಯಣ ಮತ್ತು ಗ್ರಾಮದ ಮುಖಂಡರಾದ ಎನ್.ಪಿ. ಬಸವಲಿಂಗಪ್ಪ, ಎಂ.ಬಿ. ಮುರುಗೇಂದ್ರಯ್ಯ, ಕೆ.ಜಿ. ಕುಬೇರಗೌಡ, ಕೆ.ಜಿ. ಭರಮಗೌಡ ಹಾಗೂ ಸಂಘದ ಸಿಇಓ ಬಸಮ್ಮ ಈ ವೇಳೆ ಹಾಜರಿದ್ದರು.

error: Content is protected !!