ಮಲೇಬೆನ್ನೂರು ನಾಡಕಚೇರಿಗೆ ಕಂದಾಯ ಆಯುಕ್ತರ ಭೇಟಿ

ಮಲೇಬೆನ್ನೂರು ನಾಡಕಚೇರಿಗೆ ಕಂದಾಯ ಆಯುಕ್ತರ ಭೇಟಿ

ಮಲೇಬೆನ್ನೂರು, ನ. 8 – ಇಲ್ಲಿನ ನಾಡ ಕಚೇರಿಗೆ ಶುಕ್ರವಾರ ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ ಸುನೀಲ್‌ಕುಮಾರ್ ಅವರು ಅನಿರೀಕ್ಷಿತ ಭೇಟಿ ನೀಡಿ, ಸಕಾಲ ವಿಲೇವಾರಿ ಮತ್ತು ಕಚೇರಿ ಕಡತಗಳ ವಿಲೇವಾರಿ ಪರಿಶೀಲನೆ ಮಾಡಿದರು. ಕಡತಗಳ ಪರಿಶೀಲನೆ ನಂತರ ಕಚೇರಿ ನಿರ್ವಹಣೆ ಮತ್ತು ಕಡತಗಳ ವಿಲೇವಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಯುಕ್ತರು, ಉಪತಹಶೀಲ್ದಾರ್ ಆರ್.ರವಿ ಹಾಗೂ ಅವರ ತಂಡಕ್ಕೆ ಗುಡ್ ಎಂದು ಹೇಳಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ, ಕೊಟ್ರೇಶ್, ಷರೀಫ್, ದೇವರಾಜ್, ಸೌಮ್ಯ ಮತ್ತು ನಾಡಕಚೇರಿಯ ಪುಷ್ಪಾ ಹಿರೇಮಠ, ಶಿಲ್ಪಾ, ಮಾರುತಿ, ಬಸವರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!