ನಾಳೆ ದೇಸಿ ಕಾವ್ಯ ‘ಚಾರುವಸಂತ’ ನಾಟಕ ಪ್ರದರ್ಶನ

ದಾವಣಗೆರೆ, ನ. 8- ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಇರುವ ಎಸ್. ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರು ಇದೇ ದಿನಾಂಕ 10ರಂದು ನಾಡೋಜ ಹಂಪನಾ ಅವರ `ಚಾರುವಸಂತ’ ಕಾವ್ಯಾತ್ಮಕ ನಾಟಕ   ಪ್ರದರ್ಶನ ನೀಡಲಿದ್ದಾರೆ.   

ಈ ಪ್ರದರ್ಶನವನ್ನು ಪ್ರತಿಮಾ ಸಭಾ ಹಾಗೂ ಅನ್ವೇಷಕರು ಆರ್ಟ್ ಫೌಂಡೇಶನ್ ಆಯೋಜಿಸಿದ್ದು ಪ್ರವೇಶ ಉಚಿತವಾಗಿದೆ. ಅಂದು ಸಂಜೆ 6.30ಕ್ಕೆ ಆರಂಭವಾಗುವ ಕಾರ್ಯಕ್ರಮಕ್ಕೆ ಎಸ್.ಎಸ್. ಕೇರ್ ಟ್ರಸ್ಟ್‌ನ ಅಧ್ಯಕ್ಷರಾದ ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ. ಸಭಾದ ಅಧ್ಯಕ್ಷ ಎಂ.ಜಿ. ಈಶ್ವರಪ್ಪ ಹಾಗೂ ಹಿರಿಯ ರಂಗಕರ್ಮಿಗಳು ಉಪಸ್ಥಿತರಿರುವರು ಎಂದು ಸಭಾದ ಪರವಾಗಿ ಬಾ.ಮ. ಬಸವರಾಜಯ್ಯ, ಬಿ.ಎನ್. ಮಲ್ಲೇಶ್ ಹಾಗೂ ಎಸ್. ಎಸ್. ಸಿದ್ದರಾಜು ತಿಳಿಸಿದ್ದಾರೆ.

error: Content is protected !!