ಭಾರತ ಸೇವಾದಳಕ್ಕೆ ನೂತನ ಸಂಘಟಕ

ಭಾರತ ಸೇವಾದಳಕ್ಕೆ ನೂತನ ಸಂಘಟಕ

ದಾವಣಗೆರೆ, ನ. 8- ಭಾರತ ಸೇವಾದಳ ದಾವಣಗೆರೆ ಜಿಲ್ಲೆಗೆ ಹೊಸ ಸಂಘಟಕರಾಗಿ   ಫಕ್ಕೀರಗೌಡ ಹಳೇಮನಿ ಇವರನ್ನು ನೇಮಕ ಮಾಡಿ ಭಾರತ ಸೇವಾದಳ ಕೇಂದ್ರ ಕಛೇರಿಯಿಂದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿರುತ್ತಾರೆ.

ಇಲ್ಲಿಯವರೆಗೆ ಉಡುಪಿ ಜಿಲ್ಲೆ ಭಾರತ ಸೇವಾದಳದ ಕಛೇರಿಯಲ್ಲಿ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಕಳೆದ 3 ರಂದು ಭಾರತ ಸೇವಾದಳದ ದಾವಣಗೆರೆ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ದಾವಣಗೆರೆ ಜಿಲ್ಲಾ ಭಾರತ ಸೇವಾದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಘಟಕ  ಎಂ.ಅಣ್ಣಪ್ಪ  ಅವರ ವರ್ಗಾವಣೆಯಿಂದ ಈ ಸ್ಥಾನ ತೆರವುಗೊಂಡಿತ್ತು.  ಹೊಸ ಸಂಘಟಕ ಫಕ್ಕೀರಗೌಡ ಹಳೇಮನಿಯವರಿಗೆ ತಮ್ಮ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ದಾವಣಗೆರೆ ಜಿಲ್ಲಾ ಸೇವಾದಳ ಸಂಸ್ಥೆಗೆ ಒಳ್ಳೆಯ ಹೆಸರು ತರಲು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಪ್ರೊ. ಹೆಚ್.ಚನ್ನಪ್ಪ ಪಲ್ಲಾಗಟ್ಟೆ ಎಲ್ಲರಲ್ಲೂ ಮನವಿ ಮಾಡಿದರು.

error: Content is protected !!