ಹರಿಹರದಲ್ಲಿ ಶುದ್ಧ ನೀರಿನ ಘಟಕ ದುರಸ್ತಿಗೆ ಆಗ್ರಹ

ಹರಿಹರದಲ್ಲಿ ಶುದ್ಧ ನೀರಿನ ಘಟಕ ದುರಸ್ತಿಗೆ ಆಗ್ರಹ

ಹರಿಹರ, ನ. 7- ನಗರದ ಪ್ರಸಿದ್ಧ ಐತಿಹಾಸಿಕ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಶುದ್ಧ  ನೀರಿನ ಘಟಕ   ಕೆಟ್ಟು ಹೋಗಿದ್ದು,   ಸಾರ್ವಜನಿಕರು ಇದನ್ನು ಸಂಬಂಧಪಟ್ಟ ಇಲಾಖೆ  ಅಧಿಕಾರಿಗಳ ಗಮನಕ್ಕೆ  ಹಲವಾರು ಬಾರಿ  ತಂದರೂ  ದುರಸ್ತಿ ಆಗಿರುವುದಿಲ್ಲ.  ಇಲ್ಲಿಗೆ ಬರುವ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಇದ್ದೂ ಇಲ್ಲದಂತೆ ಆಗಿರುತ್ತದೆ. ಹಾಗಾಗಿ ಆದಷ್ಟು ಬೇಗ ಯಂತ್ರವನ್ನು ದುರಸ್ತಿ ಪಡಿಸಲು ಭಕ್ತಾದಿಗಳು ಆಗ್ರಹಿಸಿದ್ದಾರೆ.

error: Content is protected !!