ಎಸ್‌ಜೆವಿಪಿ ಆವರಣದಲ್ಲಿ ಪಟಾಕಿ ಮಳಿಗೆಗಳಿಗೆ ಅನುಮತಿ ಬೇಡ : ಕ.ದ.ಸಂ. ಸಮಿತಿ ಆಗ್ರಹ

ಹರಿಹರ, ನ.7- ನಗರದ ಎಸ್‌ಜೆವಿಪಿ ಕಾಲೇಜ್ ಆವರಣದಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡದಿರುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕ ಒತ್ತಾಯಿಸಿದೆ.

ಸದರಿ ಜಾಗದಲ್ಲಿ  ಶಾಲೆ,  ಪೆಟ್ರೋಲ್ ಬಂಕ್‌, ವಾಸೋಪಯೋಗಿ ಮನೆಗಳು ಇದ್ದು ಜನದಟ್ಟಣೆ ಹೆಚ್ಚಾಗಿ ರುವುದರಿಂದ ಹೆಚ್ಚು ಸುರಕ್ಷಿತವಲ್ಲ. ಅಲ್ಲದೆ ಜಾಗ ಶೈಕ್ಷಣಿಕ ಬಳಕೆಯಲ್ಲಿದ್ದು ವಾಣಿಜ್ಯ ಉಪ ಯೋಗಕ್ಕಾಗಿ ಬಳಸುವುದು ಸರಿ ಯಲ್ಲ. ಹಾಗಾಗಿ ಊರಿನ ಹೊರ ವಲಯದಲ್ಲಿ  ಪರವಾನಗಿ ಪಡೆದಿರುವ ಪಟಾಕಿ ಅಂಗಡಿ ಗಳಿಗೆ ಮಾತ್ರ ಅವಕಾಶ ಕಲ್ಪಿಸುವಂತೆ, ತಾಲ್ಲೂಕು ಸಂಘದ ಅಧ್ಯಕ್ಷ ಎಂ.ಮಂಜುನಾಥ, ಸಂಚಾಲಕ ಜಿ.ಎಂ.ಮಂಜಪ್ಪ, ಸಂಘಟನಾ ಸಂಚಾಲಕ ಬಿ.ಎಂ.ಭಾಸ್ಕರ್ ಒತ್ತಾಯಿಸಿದ್ದಾರೆ.

error: Content is protected !!