ದೇವರಾಜು ಅರಸು ಬಡಾವಣೆಯಲ್ಲಿ ರಾಜ್ಯೋತ್ಸವ

ದೇವರಾಜು ಅರಸು ಬಡಾವಣೆಯಲ್ಲಿ ರಾಜ್ಯೋತ್ಸವ

ದಾವಣಗೆರೆ, ನ. 7- ನಗರದ ಡಿ. ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿ ವತಿಯಿಂದ ನಿನ್ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಹಿಳೆಯರಿಗೆ  ಆಯೋಜನೆ ಮಾಡಲಾಗಿದ್ದ ವಿವಿಧ ಕ್ರೀಡೆಗಳ ವಿಜೇತರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಎಸ್. ಕೇರ್ ಟ್ರಸ್ಟ್‌ನ
ಲೈಫ್ ಟ್ರಸ್ಟಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ಬಹುಮಾನ ವಿತರಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತಿ  ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ ಮಲ್ಲೇಶಪ್ಪ, ಹಿರಿಯ ನ್ಯಾಯವಾದಿ ಶ್ರೀಮತಿ ವಸುಂಧರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಶ್ರೀಮತಿ ನೀತಾ ಮಂಜುನಾಥ್, ತ್ರಿವೇಣಿ, ತಿಪ್ಪೇಶ್, ಭಾಗ್ಯಮ್ಮ, ನಾಗರಾಜಪ್ಪ, ಶ್ರೀಮತಿ ಮಹಾಲಕ್ಷ್ಮಿ ನರಸಿಂಹ ಮೂರ್ತಿ, ಮತ್ತು ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ದೀಪಾ ಜಯಂತ್ ನಿರೂಪಿಸಿದರು. ಕೆ.ಎಂ. ವೀರಯ್ಯ ಸ್ವಾಗ ತಿಸಿದರು. ಶ್ರೀಮತಿ ನಳಿನ ನಾಗರಾಜ್ ವಂದಿಸಿದರು. ಶ್ರೀಮತಿ ಲತಾ ತೀರ್ಥೇಶ್ ವೇದಿಕೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

error: Content is protected !!