ಹರಿಹರ ; ಬಡಾವಣೆಗಳಲ್ಲಿನ ಮನೆಗಳಿಗೆ ನೀರು : ಚರಂಡಿ ಸ್ವಚ್ಛಗೊಳಿಸಿದ ನಗರಸಭೆ

ಹರಿಹರ ; ಬಡಾವಣೆಗಳಲ್ಲಿನ ಮನೆಗಳಿಗೆ ನೀರು : ಚರಂಡಿ ಸ್ವಚ್ಛಗೊಳಿಸಿದ ನಗರಸಭೆ

ಹರಿಹರ, ನ.7- ನಗರದಲ್ಲಿ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತೆಗ್ಗಿನಕೇರಿ, ಕುರುಬಗೇರಿ ಬಡಾವಣೆಗಳಲ್ಲಿ ಚರಂಡಿ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಭೇಟಿ ಕೊಟ್ಟು ನಗರಸಭೆ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಚರಂಡಿ ಸ್ವಚ್ಛತೆಗೆ ಮುಂದಾಗಿ, ನೀರು ಸರಾಗವಾಗಿ ಹರಿಯುವಂತೆ ಮಾಡಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ಕಾಂಗ್ರೆಸ್ ಮುಖಂಡರಾದ ಕಿರಣ್, ರಾಕೇಶ್, ನಗರಸಭೆ ಇಂಜಿನಿಯರ್ ಮಂಜುಳಾ ಇತರರು ಹಾಜರಿದ್ದರು.

error: Content is protected !!