ದಾವಣಗೆರೆ, ನ.4- ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರ, ಜಿಲ್ಲಾ ಯೋಗಾಸನ ಮತ್ತು ಕ್ರೀಡಾ ಸಂಸ್ಥೆ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ನಾಳೆ ದಿನಾಂಕ 5ರ ಭಾನುವಾರ ನಗರದ ಶಿವಯೋಗ ಮಂದಿರದಲ್ಲಿ ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ.ಎಸ್.ಬಿ. ರವಿಕುಮಾರ್, ಕೆಎಸ್ಎವೈಎಸ್ಎ ಅಧ್ಯಕ್ಷ ಜಿ.ಎನ್ ಕೃಷ್ಣಮೂರ್ತಿ ಸ್ಪರ್ಧೆಯ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ಗಂಗಾಧರಪ್ಪ, ಜಿಲ್ಲಾಧ್ಯಕ್ಷ ಅಜ್ಜಂಪುರಶೆಟ್ರು ಮೃತ್ಯುಂಜಯ, ಟ್ರಸ್ಟ್ನ ಟ್ರಸ್ಟಿ ಎಂ. ಜಯಕುಮಾರ್, ಯೋಗ ಕೇಂದ್ರದ ಅಧ್ಯಕ್ಷ ಶರಣಾರ್ಥಿ ಬಕ್ಕಪ್ಪ, ಪಾಲಿಕೆ ಸದಸ್ಯ ಶಾಂತಕುಮಾರ್ ಸೋಗಿ, ಯೋಗ ಕೇಂದ್ರದ ಕೆ.ಎಚ್ ಸುಲೋಚನ ಪಾಲ್ಗೊಳ್ಳುವರು ಎಂದು ಹೇಳಿದರು.
ನಂತರ ಸಂಜೆ 4 ಗಂಟೆಗೆ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ವಹಿಸಲಿದ್ದು, ಕೆಎಸ್ಎವೈಎಸ್ಎ ಕಾರ್ಯ ದರ್ಶಿ ಕೆ. ಪ್ರಭು, ಟ್ರಸ್ಟ್ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ಯೋಗ ಕೇಂದ್ರದ ಭಾರತಿ ಬೇತೂರು ಬಸವರಾಜಪ್ಪ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಉಮಾಶಂಕರ್, ಅಜ್ಜಪ್ಪ ಜೆ.ಎಸ್., ಜಿ.ಎಸ್. ವೀರಣ್ಣ, ಸಿ.ಮಂಜುನಾಥ್, ಶರಣಾರ್ಥಿ ಬಕ್ಕಣ್ಣ, ನಾರಾಜ್ ಕೆ. ಕುರ್ಡೇಕರ್, ಸೋಗಿ ಶಾಂತಕುಮಾರ್ ಇತರರಿದ್ದರು.