ದಾವಣಗೆರೆ, ಅ.26- ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನ ಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ಶರನ್ನವ ರಾತ್ರಿ ಅಂಗವಾಗಿ ಇದೇ ದಿನಾಂಕ 28 ರ ಶನಿ ವಾರದಿಂದ 25 ವಾರಗಳ ಹನುಮಾನ್ ಚಾಲೀಸ್ ಪಠಣ ಸಮರ್ಪಣಾ ಪೂಜೆ ನಡೆಯುವುದು.
ಅಂದು ಬೆಳಿಗ್ಗೆ 7.30 ಕ್ಕೆ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಮಧುಪರ್ಕದ ಅಭಿಷೇಕ, ಅಲಂಕಾರ ಮತ್ತು ಶ್ರೀ ಹನುಮದ್ವೈತ ಮಧು ಅಭಿಷೇಕ, ಸಹಸ್ರ ಶಂಖ ಕ್ಷೀರಾಭಿಷೇಕ ನಡೆಯುವುದು. ಸಂಜೆ 5 ಗಂಟೆಗೆ ದೇವಿ ಭಜನಾ ಮಂಡಳಿಯವರಿಂದ 25 ಬಾರಿ ಹನುಮಾನ್ ಚಾಲೀಸ್ನ ಪಠಣ ಏರ್ಪಡಿಸಲಾಗಿದೆ.