ಮಲೇಬೆನ್ನೂರು, ಅ.24- ಜಿಗಳಿಯಲ್ಲಿ ಮಂಗಳವಾರ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಜೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಮತ್ತು ಜಿ.ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ಶಿಬಾರಕಟ್ಟೆಯಲ್ಲಿರುವ ಬನ್ನಿ ಮರದಲ್ಲಿ ಗ್ರಾಮಸ್ಥರು ಸಾಮೂಹಿಕ ಬನ್ನಿ ಮುಡಿದು, ನಂತರ ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಂಡು ದಸರಾ ಶುಭಾಶಯ ಕೋರಿದರು.
ಬುಧವಾರ ಜಿ.ಬೇವಿನಹಳ್ಳಿ ಮತ್ತು ಜಿಗಳಿಯಲ್ಲಿ ಮಹಿಳೆಯರು ದೇವರುಗಳಿಗೆ ಆರತಿ ಬೆಳಗುವ ಕಾರ್ಯಕ್ರಮ ಇರುತ್ತದೆ. ರಾತ್ರಿ ಜಿಗಳಿಯಲ್ಲಿ ದೇವರುಗಳ ಉತ್ಸವ ನಡೆಯಲಿದೆ.