ದಾವಣಗೆರೆ, ಅ.22-ಎಂಸಿಸಿ ಎ ಬ್ಲಾಕ್, 8ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸದ್ಗುರು ಸಾಯಿಬಾಬಾರವರ 105ನೇ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 24ರ ಮಂಗಳವಾರ ಬೆಳಿಗ್ಗೆ 7.30ಕ್ಕೆ ಶ್ರೀ ಸಾಯಿಬಾಬಾ ಮೂರ್ತಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ ನಡೆಯಲಿದೆ.
ದಿನಾಂಕ 25ರ ಬುಧವಾರ ಸಂಜೆ 5.30ಕ್ಕೆ ಶ್ರೀ ಸಾಯಿಬಾಬಾರವರ ಮೆರವಣಿಗೆಯು ರಾಜ ಬೀದಿಗಳಲ್ಲಿ ನಡೆಯುವುದರೊಂದಿಗೆ ಕಾರ್ಯ ಕ್ರಮ ಸಮಾರೋಪಗೊಳ್ಳಲಿದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ವಿವರಿಸಿದ್ದಾರೆ.