ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ಪರಶುರಾಮಪ್ಪ

ಜಿಲ್ಲಾ ಕುರುಬರ ಸಂಘದ  ಅಧ್ಯಕ್ಷರಾಗಿ ಪರಶುರಾಮಪ್ಪ

ದಾವಣಗೆರೆ, ಅ. 19 – ಜಿಲ್ಲಾ ಕುರುಬರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಕುರುಬ ಸಮಾಜದ ಹಿರಿಯ ಮುಖಂಡ ಬಿ.ಹೆಚ್. ಪರಶುರಾಮಪ್ಪ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹಿರಿಯ ವಕೀಲ ಲೋಕಿಕೆರೆ ಸಿದ್ದಪ್ಪ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಸಂಘದ ಖಜಾಂಚಿ ಯಾಗಿದ್ದ ಬಿ.ಹೆಚ್. ಪರಶುರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು. 

ಮೂಲತಃ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದವರಾದ ಬಿ.ಹೆಚ್. ಪರಶುರಾಮಪ್ಪ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಸಾಮಾಜಿಕ ಸೇವಾ ಕಾರ್ಯಕರ್ತರಾಗಿದ್ದಾರೆ. ಲೋಕಸಭೆ ಮಾಜಿ ಸದಸ್ಯರಾಗಿದ್ದ ಚೆನ್ನಯ್ಯ ಒಡೆಯರ್ ಅವರ ಆಪ್ತ ಒಡನಾಡಿಗಳಲ್ಲೊಬ್ಬರಾಗಿದ್ದರು.

error: Content is protected !!