ಹರಿಹರದಲ್ಲಿ ಶ್ರೀ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲು ಸಮಾಜದ ಮನವಿ

ಹರಿಹರದಲ್ಲಿ ಶ್ರೀ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲು ಸಮಾಜದ ಮನವಿ

ಹರಿಹರ, ಅ,19- ನಗರದಲ್ಲಿ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ  ಪ್ರತಿಮೆ ಪ್ರತಿಷ್ಠಾಪಿಸುವಂತೆ ತಾಲ್ಲೂಕು ವಾಲ್ಮೀಕಿ ಸಮಾಜದ ವತಿಯಿಂದ ನಗರಸಭೆ ಅಧ್ಯಕ್ಷರಾದ ನಿಂಬಕ್ಕ ಚಂದಾಪೂರ್ ಮತ್ತು ಪೌರಾಯುಕ್ತ ಐಗೂರು ಬಸವರಾಜ್ ಅವರಿಗೆ ಮನವಿ ಅರ್ಪಿಸಲಾಯಿತು.

ಈ ವೇಳೆ ವಾಲ್ಮೀಕಿ ಸಮಾಜದ ನಿಕಟ ಪೂರ್ವ ಅಧ್ಯಕ್ಷ ಕೆ‌.ಬಿ. ಮಂಜುನಾಥ್ ಹಾಗೂ ಅಧ್ಯಕ್ಷ ಎಂ.ಹೆಚ್. ಬಸವರಾಜ್ ಮಾತನಾಡಿ, ಪ್ರತಿಮೆಯನ್ನು ನಗರದ ಹೊರಭಾಗದ ಎರಡನೇ ರೈಲ್ವೆ ಗೇಟ್ ಬಳಿ ಅಮ್ಯೂಸ್ ಮೆಂಟ್ ಪಾರ್ಕ್ ಮುಂಭಾಗದ ರಸ್ತೆ ಹತ್ತಿರ ಪ್ರತಿಷ್ಠಾಪನೆ ಮಾಡಿ, ತಾಲ್ಲೂಕಿನಲ್ಲಿ ಇರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಗೌರವ ಸೂಚಿಸಬೇಕು ಎಂದು ಹೇಳಿದರು.

ಈ ವಿಷಯವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಗಮನಕ್ಕೆ ತರುವ ಮೂಲಕ ಚರ್ಚಿಸಲಾಗುತ್ತದೆ ಎಂದು ಅಧ್ಯಕ್ಷರು ಮತ್ತು ಆಯುಕ್ತರು ತಿಳಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ದಿನೇಶ್ ಬಾಬು, ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಆರ್. ರಾಜು, ಪಾರ್ವತಿ, ದೇವೇಂದ್ರಪ್ಪ ಹಂಚಿನಮನೆ, ಗಂಗಾಧರ ಮೆಣಸಿನಹಾಳ, ಪರಶುರಾಮ್, ಧನರಾಜ್, ಅಂಜನಮ್ಮ ಗುಂಡಗತ್ತಿ, ಹೊನ್ನಪ್ಪ ಗಂಗನಹರಸಿ, ಮೊಹನ್ ಕುಮಾರ್, ಭರತ್ ಮುದೇನೂರು ಹಾಗು ಇತರರು ಹಾಜರಿದ್ದರು.

error: Content is protected !!