ಹರಿಹರ : ಊರಮ್ಮ ದೇವಿಯ ದೇವಸ್ಥಾನಕ್ಕೆ ಕುಡಿಯುವ ನೀರಿನ ಟ್ಯಾಂಕರ್‌ ಕೊಡುಗೆ

ಹರಿಹರ : ಊರಮ್ಮ ದೇವಿಯ ದೇವಸ್ಥಾನಕ್ಕೆ ಕುಡಿಯುವ ನೀರಿನ ಟ್ಯಾಂಕರ್‌ ಕೊಡುಗೆ

ಹರಿಹರ, ಅ. 18- ನಗರದ ಮಾಜೇನಹಳ್ಳಿ ಗ್ರಾಮದೇವತೆ ಊರಮ್ಮ ದೇವಿಯ ದೇವಸ್ಥಾನದ ಭಕ್ತರಿಗೆ ಕುಡಿಯುವ ನೀರಿನ ಟ್ಯಾಂಕರ್‌ ಅನ್ನು 37 ಸಾವಿರ ರೂಪಾಯಿ ವೆಚ್ಚದಲ್ಲಿ ಬಾಲಕೃಷ್ಣ ಮಹಿಷ್ಕರ್ (ಟಿಕಾರೆ) ರವರು ದಾನವನ್ನು ಮಾಡಿದ್ದು, ಗ್ರಾಮದೇವತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಲಸಬಾಳು ಹೆಚ್.ಎಂ. ಶಿವಾನಂದಪ್ಪ ಮತ್ತು ಕೋಶಾಧಿಕಾರಿ ಗೌಡ್ರು ಚನ್ನಬಸಪ್ಪ ಚಾಲನೆ ನೀಡಿದರು.

ಈ ವೇಳೆ ಕುಡಿಯುವ ನೀರಿನ ಟ್ಯಾಂಕರ್ ದಾನವಾಗಿ ನೀಡಿದ ಬಾಲಕೃಷ್ಣ ಮಹಿಷ್ಕರ್ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬಿ.ಪಿ. ಹರೀಶ್,  ಉಪಾಧ್ಯಕ್ಷ ಸುಭಾಷ್ ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಸಿ.ಎನ್. ಹುಲುಗೇಶ್, ಸಹ ಕಾರ್ಯದರ್ಶಿ ಅಶೋಕ್ ಆರ್. ಭೂತೆ, ಧರ್ಮದರ್ಶಿಗಳಾದ ಡಿ.ಹೇಮಂತರಾಜ್,
ಜಿ.ಬಿ. ಚಂದ್ರಶೇಖರಪ್ಪ, ಡಿ.ಯಮುನಪ್ಪ, ಕೆ ಶಿವಪ್ರಕಾಶ್ ಶಾಸ್ತ್ರಿ, ಹಂಚಿನ ನಾಗಪ್ಪ, ಡಿ. ನಟರಾಜ್, ಆರ್.ಎಸ್. ಕಾರ್ತಿಕ್‌, ನಿಂಗಪ್ಪ ಪೂಜಾರ್, ಅರ್ಚಕರಾದ ಜನಾರ್ದನಚಾರ್, ನಾಗರಾಜಚಾರ್, ಬಣಕಾರ ಜಿ.ಎಲ್. ಆಂಜನೇಯ, ರಾಮಪ್ಪ, ದೇವೇಂದ್ರಪ್ಪ, ಪತ್ರಕರ್ತ ಎಂ‌. ಚಿದಾನಂದ ಕಂಚಿಕೇರಿ, ಲಿಂಗೇಶ್, ಮತ್ತಿತರರು ಹಾಜರಿದ್ದರು.

error: Content is protected !!