ಶಿವಮೊಗ್ಗ ವಿಮಾನ ನಿಲ್ದಾಣದಿಂದ -ಬೆಂಗಳೂರಿಗೆ

ಶಿವಮೊಗ್ಗ ವಿಮಾನ ನಿಲ್ದಾಣದಿಂದ -ಬೆಂಗಳೂರಿಗೆ

ಅಜ್ಜಿ-ಮೊಮ್ಮಗನ ಪ್ರಯಾಣ ; ಸಂತಸದ ಕ್ಷಣ

ದಾವಣಗೆರೆ, ಅ. 16-   ತಮ್ಮ ಅಜ್ಜಿಯನ್ನು ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಮಾಡಿಸಬೇಕೆಂಬ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಕಾಸ್ ಕಬ್ಬೂರು ಅವರ ಆಸೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗಿರುವುದರಿಂದ ಈಡೇರಿದೆ.

ಅಜ್ಜಿಗೆ ಕಾಲು ಆಪರೇಷನ್ ಆಗಿರುವುದರಿಂದ ದೂರದ ಪ್ರಯಾಣ ಕಷ್ಟವಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾಗಿದ್ದರಿಂದ ಕೇವಲ ಒಂದು ಗಂಟೆಯಲ್ಲಿ ತನ್ನ ಅಜ್ಜಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರುವುದು ವಿಕಾಸ್ ಕಬ್ಬೂರ್ ಅವರಿಗೆ ಸಂತೋಷ ತಂದಿದೆ.

ವಿಕಾಸ್ ಕಬ್ಬೂರ್, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದ ಅಜ್ಜಯ್ಯ, ಅಕ್ಕಾಮಹಾದೇವಿ ಪುತ್ರರಾಗಿದ್ದು, ಕುಟುಂಬ ಸಮೇತ ವಿಮಾನದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪಿರುವ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

error: Content is protected !!