ನಗರದ ಶಾರದಾಂಬಾ ದೇವಿಗೆ ಇಂದು ವೃಷಭ ವಾಹನಾಲಂಕಾರ

ನಿಜಲಿಂಗಪ್ಪ ಬಡಾವಣೆಯ ರಿಂಗ್‌ ರಸ್ತೆಯಲ್ಲಿರುವ ಶ್ರೀ ಗಣಪತಿ, ಶ್ರೀ ಶಾರದಾಂಬಾ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಶಾರದಾಂಬಾ ದೇವಿಗೆ ವೃಷಭ ವಾಹನಾಲಂಕಾರ ನಡೆಯುವುದು.  ಇಂದು ಸಂಜೆ 5 ಗಂಟೆಗೆ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರಗಳು ಪಠಣವಾಗಲಿದೆ. 6 ಗಂಟೆಗೆ ಶಿವಪ್ರಕಾಶ ಶಾಸ್ತ್ರಿ (ಹರಿಹರ) ಇವರಿಂದ `ಶ್ರೀ ಶಂಕರಾಚಾರ್ಯರ ಸ್ತೋತ್ರ ವೈಭವ’ ವಿಷಯ ಕುರಿತು ಉಪನ್ಯಾಸ ನಡೆಯುವುದು.

error: Content is protected !!