ರಾಣೇಬೆನ್ನೂರು, ಅ.15- ನಗರದ ಎನ್.ಆರ್.ಸಂಕೇತ ಹೈಸ್ಕೂಲಿನ ಅಧ್ಯಕ್ಷರೂ, ನಿವೃತ್ತ ಪ್ರಾಂಶುಪಾಲರೂ ಆದ ಪ್ರೊ.ಎನ್.ಕೆ. ರಾಮಚಂದ್ರಪ್ಪ ಅವರು ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.
ಇದೇ ದಿನಾಂಕ 19ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ನಡೆಯುವ ಕವಿಗೋಷ್ಠಿಯನ್ನು ಎಸ್.ಜಿ.ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀಮತಿ ಚ.ಸರ್ವಮಂಗಳ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಎಸ್.ಟಿ.ಪೋತೆ, ಖ್ಯಾತ ಸಾಹಿತಿಗಳು ಭಾಗವಹಿಸುವರು ಎಂಬುದಾಗಿ ದಸರಾ ಕವಿಗೋಷ್ಠಿಯ ಉಪಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ವಿಜಯಕುಮಾರಿ ಎಸ್.ಕರಿಕಲ್ ಹೇಳಿದ್ದಾರೆ.
ಮೈಸೂರಿನ ದಸರಾ ಕವಿಗೋಷ್ಠಿಗೆ ರಾಣೇಬೆನ್ನೂರಿನ ರಾಮಚಂದ್ರಪ್ಪ ಆಯ್ಕೆ
![29 rnr ramachandrappa 16.10.2023 ಮೈಸೂರಿನ ದಸರಾ ಕವಿಗೋಷ್ಠಿಗೆ ರಾಣೇಬೆನ್ನೂರಿನ ರಾಮಚಂದ್ರಪ್ಪ ಆಯ್ಕೆ](https://janathavani.com/wp-content/uploads/2023/10/29-rnr-ramachandrappa-16.10.2023.jpg)