ಹೊಳೆಸಿರಿಗೆರೆಯಲ್ಲಿ ರಥದ ಮೂಲಕ ಡೆಂಗ್ಯೂ ಜ್ವರದ ಜಾಗೃತಿ

ಹೊಳೆಸಿರಿಗೆರೆಯಲ್ಲಿ ರಥದ ಮೂಲಕ ಡೆಂಗ್ಯೂ ಜ್ವರದ ಜಾಗೃತಿ

ಮಲೇಬೆನ್ನೂರು, ಅ.12- ಹೊಳೆಸಿರಿಗೆರೆ ಗ್ರಾಮದಲ್ಲಿ ರಥದ ಮೂಲಕ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆರೋಗ್ಯ ಇಲಾಖೆಯಿಂದ ಸಿದ್ಧಪಡಿಸಿರುವ ಈ ಡೆಂಗ್ಯೂ ರಥವು ಹಳ್ಳಿ ಹಳ್ಳಿಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸಲಿದೆ. ಕಾರ್ಯಕ್ರಮದಲ್ಲಿ ಡೆಂಗ್ಯೂ, ಚಿಕುನ್‌ಗುನ್ಯ ಕಾಯಿಲೆ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚೇತನ್ ಅವರು ಮಾಹಿತಿ ಶಿಕ್ಷಣ ನೀಡಿದರು. ಗ್ರಾ.ಪಂ. ಅಧ್ಯಕ್ಷ ಬಿ. ಶೇಖರಪ್ಪ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!