ನಗರದಲ್ಲಿ ಇಂದು ಶ್ರೀ ಜಯದೇವ ಜಗದ್ಗುರುಗಳ ರಥೋತ್ಸವ

ನಗರದಲ್ಲಿ ಇಂದು ಶ್ರೀ ಜಯದೇವ ಜಗದ್ಗುರುಗಳ ರಥೋತ್ಸವ

ಚಿತ್ರದುರ್ಗ ಬೃಹನ್ಮಠದ ಹಿರಿಯ ಜಗದ್ಗುರು ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 67ನೇ ವರ್ಷದ ಸ್ಮರಣೋತ್ಸವ-ರಥೋತ್ಸವ ಇಂದು ಬೆಳಿಗ್ಗೆ 11 ಗಂಟೆಗೆ ಬಸವ ಕೇಂದ್ರ-ಶ್ರೀ ಶಿವಯೋಗಾಶ್ರಮದಲ್ಲಿ ನಡೆಯಲಿದೆ.

ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ, ಅಥಣಿ ಶ್ರೀ ಗಚ್ಚಿನ ಮಠದ ಶ್ರೀ ಶಿವ ಬಸವ ಮಹಾಸ್ವಾಮೀಜಿ, ಗುರುಮಠಕಲ್‌ನ ಶ್ರೀ ಖಾಸಾ ಮಠದ ಶ್ರೀ ಶಾಂತ ವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು.

ಇದೇ ಸಂದರ್ಭದಲ್ಲಿ ಚನ್ನಗಿರಿಯ ಪ್ರವಚನಕಾರರಾದ ಮಹಾಂತೇಶ ಶಾಸ್ತ್ರಿಗಳಿಂದ ಶ್ರೀ ಜಯದೇವ ಲೀಲೆ ಪ್ರವಚನ ನಡೆಯಲಿದ್ದು, ದಾವಣಗೆರೆ ವಿರಕ್ತಮಠದ  ಶ್ರೀ ಬಸವ ಕಲಾ ಲೋಕದಿಂದ ವಚನ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ.

ಈ ಕಾರ್ಯಕ್ರಮದ ನಂತರ ಸಂಜೆ 5 ಗಂಟೆಗೆ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ರಥೋತ್ಸವ ಮತ್ತು ವಚನ ಗ್ರಂಥ ಮೆರವಣಿಗೆ ಆಯೋಜನೆಗೊಂಡಿದೆ. ಶ್ರೀ ಜಯದೇವ ಜಗದ್ಗುರುಗಳವರ ಭಾವಚಿತ್ರದೊಂದಿಗೆ ಲಿಂಗಾಯಿತ ಧರ್ಮಗ್ರಂಥವಾದ ಬಸವಾದಿ ಶರಣರ ವಚನ ಸಾಹಿತ್ಯ ಉತ್ಸವವು ಜರುಗಲಿದೆ.

error: Content is protected !!