ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ 10.30ಕ್ಕೆ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜೆ ಜೆ ಎಂ ಮೆಡಿಕಲ್ ಕಾಲೇಜಿನ ಮನೋ ಚಿಕಿತ್ಸಾ ವಿಭಾಗದಿಂದ ಮಾನಸಿಕ `ಆರೋಗ್ಯ ಜಾಗತಿಕ ಮಾನವನ ಹಕ್ಕು’ ಕುರಿತು ಕಾರ್ಯಕ್ರಮ ನಡೆಯಲಿದೆ.
ಡಿ.ವಿ. ನಾಗರಾಜಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮ ವನ್ನು ಜೆಜೆಎಂ ಮೆಡಿಕಲ್ ಕಾಲೇಜಿನ ಮಾನಸಿಕ ತಜ್ಞ ಡಾ. ಕೆ. ನಾಗರಾಜ್ ರಾವ್ ಅವರು ಉದ್ಘಾಟಿಸಲಿದ್ದಾರೆ. ಜೆಜೆಎಂ ಕಾಲೇಜಿನ ಮನೋ ವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಾಂತೇರಿ ಪೈ ಅವರು ಮಾನಸಿಕ ಆರೋಗ್ಯ ವಿಷಯವಾಗಿ ಮಾತನಾಡಲಿದ್ದಾರೆ. ಕಾಲೇಜಿನ ಮುಖ್ಯಸ್ಥ ಬಿ.ಆರ್.ಟಿ. ಸ್ವಾಮಿ, ಪ್ರಾಚಾರ್ಯ ಕೆ. ರಾಜಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.