ರಾಣೇಬೆನ್ನೂರು ಮಾರ್ಕಂಡೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 1.5 ಲಕ್ಷ ನೆರವು

ರಾಣೇಬೆನ್ನೂರು ಮಾರ್ಕಂಡೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 1.5 ಲಕ್ಷ ನೆರವು

ರಾಣೇಬೆನ್ನೂರು, ಅ.9-ಇಲ್ಲಿನ ಶ್ರೀ ಸಿದ್ದೇಶ್ವರ ನಗರದ ಶ್ರೀ ಗುರು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ  ಟ್ರಸ್ಟ್‌ನ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅವರು 1,50,000 ರೂ.ಗಳ ಧನ ಸಹಾಯ ನೀಡಿದ್ದಾರೆ.

ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ್,   ದೇವಸ್ಥಾನದ ಅಧ್ಯಕ್ಷ  ನಾಗರಾಜ ಅಗಡಿ ಹಾಗೂ ಉಪಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಇವರಿಗೆ    ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಲಕ್ಷಣ ಕಡ್ಲಿಬಾಳ, ಕರಿಬಸಪ್ಪ ಹಳ್ಳಳ್ಳಿ,   ಜ್ಞಾನ ವಿಕಾಸ ಸಮನ್ವಯ ಅಧಿಕಾರಿ  ಶೋಭಾ,  ತಾರಾ ಹಿರೇಮಠ್ ಹಾಗೂ ಒಕ್ಕೂಟದ ಅಧ್ಯಕ್ಷೆ ಶಾಂತಮ್ಮ,   ಶಂಕ್ರಣ್ಣ ಗರಡಿಮನಿ, ನೀಲಪ್ಪ ಕುಮಾರಪ್ಪನವರ, ಪರಶುರಾಮ  ಅಗಡಿ ,   ಕೃಷ್ಣಪ್ಪ ಕಮದೋಡ ,  ರೇವಣಸಿದ್ದಪ್ಪ ಗುತ್ತೂರು,  ಮಾರುತಿ ಗರಡಿಮನಿ, ಎಲ್ಲಪ್ಪ ಗುತ್ತಲ, ವೆಂಕಟೇಶ್ ಪೇನಗೊಂಡಲ, ಬೆನಕೇಶ ಹದಡಿ, ಅರ್ಚಕರಾದ ಶಾಂತವೀರಯ್ಯ ಹಿರೇಮಠ, ಶಂಭು ಹಿರೇಮಠ   ಉಪಸ್ಥಿತರಿದ್ದರು. ತಾರಾ ಹಿರೇಮಠ  ಸ್ವಾಗತಿಸಿದರು. ವಂದನಾರ್ಪಣೆಯನ್ನು  ಕರಿಬಸಪ್ಪ ಹಳ್ಳಳ್ಳಿ ವಂದಿಸಿದರು. 

error: Content is protected !!