ಚಿತ್ರದುರ್ಗ ಬೃಹನ್ಮಠದ ಹಿರಿಯ ಜಗದ್ಗುರು ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 67ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಶ್ರೀ ಜಯದೇವ ಲೀಲೆ ಪ್ರವಚನದ ಉದ್ಘಾಟನಾ ಕಾರ್ಯಕ್ರಮ ಇಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಶಿವಯೋಗಾಶ್ರಮದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ಕಾರ್ಯಕ್ರಮವನ್ನು ತೇಜಸ್ವಿ ವಿ. ಪಟೇಲ್ ಉದ್ಘಾಟಿಸುವರು. ಮಹಾಂತೇಶ ಶಾಸ್ತ್ರಿ (ಚನ್ನಗಿರಿ) ಇವರಿಂದ ಪ್ರತಿದಿನ ಸಂಜೆ 6 ಗಂಟೆಗೆ ಇವರು ಪ್ರವಚನ ನೆಡೆಯುವುದು. ಶ್ರೀ ಬಸವಲೋಕ (ದಾವಣಗೆರೆ) ಇವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯುವುದು.
ಇದೇ ದಿನಾಂಕ 12ರ ಗುರುವಾರ ಸಂಜೆ 6 ಗಂಟೆಗೆ 67ನೇ ವರ್ಷದ ರಥೋತ್ಸವ ವಚನಗ್ರಂಥ ಮೆರವಣಿಗೆ ಶ್ರೀ ಜಯದೇವ ಜಗದ್ಗುರುಗಳವರ ಭಾವಚಿತ್ರದೊಂದಿಗೆ ಧರ್ಮಗ್ರಂಥವಾದ ಬಸವಾದಿ ಶರಣರ ವಚನ ಸಾಹಿತ್ಯ ಉತ್ಸವವು ಜರುಗಲಿದೆ.