ಜಗಳೂರು ತಾಲ್ಲೂಕು, ಬಸವನಕೋಟೆ ಗ್ರಾಮದ ಶ್ರೀ ರೇವಣಸಿದ್ದಪ್ಪ ಮತ್ತು ಡಾ|| ಸಿದ್ದಲಿಂಗಪ್ಪ (USA) ಇವರ ತಾಯಿಯವರೂ ಮತ್ತು ಲಿಂ|| ಶ್ರೀ ಹುಣಸೆಕಟ್ಟೆ ಮರುಳಪ್ಪನವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಅವರು ದಿನಾಂಕ 06-10-2023ರ ಶುಕ್ರವಾರ ಬೆಳಗಿನ ಜಾವ 4.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶ್ರೀಮತಿ ಪಾರ್ವತಮ್ಮ ಅವರ ಪಾರ್ಥೀವ ಶರೀರವನ್ನು ದಿನಾಂಕ 09-10-2023ರ ಸೋಮವಾರ ಬೆಳಿಗ್ಗೆ 8 ರಿಂದ 10 ಗಂಟೆೆಯವರೆಗೆ ದಾವಣಗೆರೆಯ ಎಂ.ಸಿ.ಸಿ. `ಬಿ’ ಬ್ಲಾಕ್, 4ನೇ ಮೇನ್, 2ನೇ ಕ್ರಾಸ್ನಲ್ಲಿರುವ (# 2841) ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಬಸವನಕೋಟೆ ಗ್ರಾಮದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಬಂದವರು ತಿಳಿಸಿದ್ದಾರೆ
August 28, 2024