ನಾಳೆ ದತ್ತಿ ಉಪನ್ಯಾಸ

ದಾವಣಗೆರೆ, ಅ.8- ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ದತ್ತಿ ಉಪನ್ಯಾಸ, ಚೆನ್ನಬಸವಣ್ಣ, ಕಲ್ಯಾಣ ಕ್ರಾಂತಿ ಸ್ಮರಣೆ ಕಾರ್ಯಕ್ರಮ ನಗರದ  ಶ್ರೀ ಗುರುಬಸವ ಮಂಟಪದಲ್ಲಿ ನಾಡಿದ್ದು ದಿನಾಂಕ 10 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ವಿನೋದ ಅಜಗಣ್ಣನವರ್‌ ಅಧ್ಯಕ್ಷತೆ ವಹಿಸುವರು.  ಲಿಂ. ಪ್ರೊ. ಬಿ.ಕೆ. ಸಿದ್ದಪ್ಪ ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ ಸಾವಿತ್ರಮ್ಮ ಸಿದ್ದಪ್ಪ ಹಾಗೂ ಲಿಂ. ಕೆ.ಜಿ. ಕಲ್ಲಪ್ಪ ಮತ್ತು ಲಿಂ. ಕೆ.ಜಿ. ಲೋಕೇಶ್ವರಮ್ಮ ದತ್ತಿಯನ್ನು ದತ್ತಿ ದಾನಿಗಳಾದ ಕೆ.ಜಿ. ಸದಾನಂದಪ್ಪ ಮತ್ತು ಸಹೋದರರು, ಶ್ರೀಮತಿ ಪಲ್ಲವಿ ಪಾಟೀಲ್ ನಡೆಸಿಕೊಡುವರು.

error: Content is protected !!