ಹರಿಹರ : ಯೋಗ ನಿಸರ್ಗ ಚಿಕಿತ್ಸಾ ಶಿಬಿರ

ಹರಿಹರ, ಅ. 6- ನಗರದ ಧನ್ವಂತರಿ ಪತಂಜಲಿ ಯೋಗ ಕೇಂದ್ರ, ಯಶಸ್ವಿ ಕಿರಣ ಸೇವಾ ಸಂಸ್ಥೆ, ಬಸವ ಪತಂಜಲಿ ಯೋಗ ಸಮಿತಿ ಕಪತ್ತು ಗುಡ್ಡ ಗದಗ, ಶ್ರೀಮತಿ ಗಿರಿಯಮ್ಮ ಕಾಲೇಜು ಹಾಗೂ ಶ್ರೀ ಕಾಮಧೇನು ಕ್ರೀಡಾ ಮತ್ತು ಸಾಂಸ್ಕೃತಿಕ ಸಮುದಾಯ ಸೇವಾ ಸಂಘದ ವತಿಯಿಂದ  ಇದೇ ದಿನಾಂಕ 10 ರಿಂದ 22 ರವರೆಗೆ ವೀರೇಶ್ ಗುರೂಜಿ ಇವರಿಂದ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರವನ್ನು ನಗರದ ಗಿರಿಯಮ್ಮ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಯೋಗ ಉಪನ್ಯಾಸಕ ಜಯರಾಂ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ನಿರಂಜನ್, ವಿಶ್ವನಾಥ್, ಕಾರ್ತಿಕ್ ಕುಮಾರ್, ಕರಿಬಸಪ್ಪ ಕಂಚಿಕೇರಿ, ಶಶಿನಾಯ್ಕ್,  ಜ್ಯೋತಿ, ಮೀನಾಕ್ಷಿ, ವೀಣಾ ಇತರರು ಹಾಜರಿದ್ದರು.

error: Content is protected !!