ಮಲೇಬೆನ್ನೂರು, ಅ. 5 – ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘ ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಲೇಬೆನ್ನೂರಿನ ಎಸ್.ಬಿ.ಕೆ.ಎಂ. ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಅವರನ್ನು ಅವರ ಸ್ವಗ್ರಾಮ ಹಾಲಿವಾಣದ ಗ್ರಾ.ಪಂ. ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿದೇವಿ ಮಂಜುನಾಥ್, ಮಾಜಿ ಅಧ್ಯಕ್ಷ ಚಿಕ್ಕಪ್ಪ, ಸದಸ್ಯರಾದ ಕಬ್ಬಾರ್ ಚಂದ್ರಪ್ಪ, ದಿಬ್ಬದಹಳ್ಳಿ ಓಂಕಾರಪ್ಪ, ಎಸ್.ಇ. ಹಾಲೇಶ್, ಮೋಹನ್ ಮತ್ತು ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಪಿಡಿಓ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.