ದೇಶೀಯ ಕ್ರೀಡೋತ್ಸವಕ್ಕೆ ಒಲವು

ದೇಶೀಯ ಕ್ರೀಡೋತ್ಸವಕ್ಕೆ ಒಲವು

ರಾಣೇಬೆನ್ನೂರು, 4 – ದೇಶೀಯ ಆಟಗಳು ಕಣ್ಮರೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವಕರು ಕೇವಲ ಮೊಬೈಲ್‍ಗಳ ದಾಸರಾಗದೇ ಕಬಡ್ಡಿ, ಖೋಖೋ ದಂತಹ ದೇಶೀಯ ಕ್ರೀಡೆಗಳನ್ನಾಡಬೇಕು ಎಂದು ಕ್ರೀಡೋತ್ಸವ ಉದ್ಘಾಟಿಸಿ ಶ್ರೀ ಸತ್ಯನಾರಾಯಣ ಹೊಳಬಾಗಿಲ ಕರೆ ನೀಡಿದರು.

ನಗರದ ದೀನಬಂಧು ಸೇವಾ ಸಮಿತಿ ವತಿಯಿಂದ ದೇವರಗುಡ್ಡ ಗ್ರಾಮದಲ್ಲಿ ಗ್ರಾಮಾಂತರ ಕ್ರೀಡೋತ್ಸವ ನಡೆಯಿತು.  

ಈ ಸಂದರ್ಭದಲ್ಲಿ ದೀನಬಂಧು ಸೇವಾ ಸಮಿತಿ ಮುಖ್ಯಸ್ಥರಾದ ಅಶೋಕ ನಾಡಿಗೇರ, ಹಾಗೂ ಮಹೇಶ ಶೇಪೂರ, ಮಾರ್ತಾಂಡ ಕುಲಕರ್ಣಿ, ರಾಘವೇಂದ್ರ, ವಿನಾಯಕ ತಳಗೇರಿ, ಪ್ರಭು ಪಾಟೀಲ್, ನಾಗರಾಜ ಹೊನ್ನಜೋಗಿ, ನವೀನ ಹೊನ್ನಜೋಗಿ, ಉಮೇಶ ಹರಿಸತ್ಯನವರ ಮುಂತಾದವರು ಉಪಸ್ಥಿತರಿದ್ದರು.

error: Content is protected !!