ದಾವಣಗೆರೆ, ಅ. 3 – ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಪಿ.ಎಸ್.ಎಸ್. ಪಿಯು ಸೈನ್ಸ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆಯ ಕುರಿತಂತೆ ವಿದ್ಯಾರ್ಥಿನಿ ಕು. ಸುವಿದ ಮತ್ತು ಮೆಹರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಪಿ. ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಸಿ. ವಿಜಯ್ ಕುಮಾರ್ ನಿರೂಪಿಸಿದರು. ವಿನಯ್ ಕುಮಾರ್ ವಂದಿಸಿದರು.
ಎಸ್ಪಿಎಸ್ಎಸ್ ಕಾಲೇಜಿನಲ್ಲಿ ಗಾಂಧೀಜಿ ಜಯಂತಿ
![08 pacs 04.10.2023 ಎಸ್ಪಿಎಸ್ಎಸ್ ಕಾಲೇಜಿನಲ್ಲಿ ಗಾಂಧೀಜಿ ಜಯಂತಿ](https://janathavani.com/wp-content/uploads/2023/10/08-pacs-04.10.2023-860x347.jpg)