ನಗರದಲ್ಲಿ ಇಂದು ಜಾಗೃತಿ ವಾಕಥಾನ್

ಗಾಂಧಿ ಜಯಂತಿ ನಿಮಿತ್ತ ದೇವನಗರಿ ವಲಯ 9 ರ ದಾವಣಗೆರೆ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ನಮ್ಮ ದಾವಣಗೆರೆ ಸಾಮಾಜಿಕ ಸಂಘಟನೆ, ಏಜು ಏಷ್ಯಾ ಮತ್ತು ದೆಹಲಿ ಪಬ್ಲಿಕ್ ಸ್ಕೂಲ್ ನ ಸಹಯೋಗ ದೊಂದಿಗೆ ಇಂದು ಬೆಳಿಗ್ಗೆ 7.30ಕ್ಕೆ ಗುಂಡಿ ಮಹಾದೇವಪ್ಪ ವೃತ್ತದಿಂದ ವಿದ್ಯಾನಗರ 1ನೇ ಬಸ್ ನಿಲ್ದಾಣದವರೆಗೆ ವಾಕಥಾನ್-ಜಾಗೃತಿ ನಡಿಗೆ, ಸ್ವಚ್ಛತಾ ಆಂದೋಲನ ಏರ್ಪಡಿಸ ಲಾಗಿದೆ. ನಂತರ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆನಂದ ಕುಮಾರ್ ಅಂದನೂರು ತಿಳಿಸಿದ್ದಾರೆ.

error: Content is protected !!