ದಾವಣಗೆರೆ, ಅ. 1- ಗಾಂಧಿ ಜಯಂತಿ ಪ್ರಯುಕ್ತ ಪತಂಜಲಿ ಯೋಗ ಸಮಿತಿ ವತಿಯಿಂದ ಶ್ರೀ ಸಿದ್ದಗಂಗಾ ಯೋಗ ಕೇಂದ್ರದ ಯೋಗ ಸಾಧಕರು ಪಾರ್ಕ್ ಹಾಗೂ ಸುತ್ತಮುತ್ತಲಿರುವ ಸ್ಥಳವನ್ನು ಸ್ವಚ್ಛ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಭಾರತ್ ಸ್ವಾಭಿಮಾನ ಟ್ರಸ್ಟ್ ಸದಸ್ಯ ಸುನಿಲ್ ಕುಮಾರ್, ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ, ಮಹಿಳಾ ಪತಂಜಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಅಂಜಲಿ ಹಾಗೂ ಶ್ರೀಮತಿ ಎಸ್. ಮಂಜುಳಾ ಪಾಟೀಲ್, ಸಿದ್ಧಗಂಗಾ ಯೋಗ ಕೇಂದ್ರದ ಯೋಗ ಶಿಕ್ಷಕ ಮುಜೀಬ್ ಖಾನ್, ಯೋಗ ಸಾಧಕರು ಉಪಸ್ಥಿತರಿದ್ದರು. ಸ್ವಚ್ಛತಾ ಕಾರ್ಯ ನೆರವೇರಿಸಿದರು.