ದಾವಣಗೆರೆ, ಸೆ. 29- ಬೆಂಗಳೂರಿನ ಆರ್.ಎ. ಮಡ್ಕೂರು ಅಗ್ನಿಶಾಮಕ ತರಬೇತಿ ಅಕಾಡೆಮಿಯಲ್ಲಿ ಮೊನ್ನೆ ನಡೆದ 2022 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸ್ಟಾಫ್ ಆಫೀಸರ್ (ಪ್ರಚಾರ) ಮತ್ತು ನ್ಯಾಮತಿ ಘಟಕದ ಘಟಕಾಧಿಕಾರಿ, ಪ್ಲಟೂನ್ ಕಮಾಂಡರ್ ಎಂ. ರಾಘವೇಂದ್ರ ಅವರಿಗೆ ಪದಕ ಪ್ರದಾನ ಮಾಡಲಾಯಿತು. ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಲ್ಲಾ ಕಮಾಂಡೆಂಟ್ ಡಾ.ಎಸ್.ಹೆಚ್. ಸುಜಿತ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದು ಅಭಿನಂದಿಸಿದರು.
July 4, 2024