ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶ

ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶ

ರಾಣೇಬೆನ್ನೂರು, ಸೆ. 28- ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗಗಳ ಆಶ್ರಯದಲ್ಲಿ ಇಂಧನ ಸಂರಕ್ಷಣೆ ಮತ್ತು  ಇಂಧನ ದಕ್ಷತೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಕಾರ್ಯಕ್ರಮ , ಕ್ವಿಜ್, ಪ್ರದರ್ಶನ ಏರ್ಪಡಿಸಲಾಗಿತ್ತು. 

 ರಚನಾ ಎನರ್ಕೇರ್ ಚೇರ್ಮನ್ ಅನಿಲ್ ಕುಮಾರ್ ನಾಡಿಗೇರ ಉದ್ಘಾಟಿಸಿ ಮಾತನಾಡುತ್ತಾ, ಇಂಧನದ ಬಳಕೆಯನ್ನು ಮಿತಿಗೊಳಿಸಲು ನಾವು ತೆಗೆದುಕೊಳ್ಳುವ ಪ್ರಯತ್ನಗಳು ಮತ್ತು ಕ್ರಮಗಳನ್ನು  ಇಂಧನ ಸಂರಕ್ಷಣೆ ಎಂದು ಕರೆಯಲಾಗುತ್ತದೆ. 

ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಪ್ರಕೃತಿಯಲ್ಲಿ ಪುನಃ ತುಂಬಿಸಬಹುದು, ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶವಾಗಿದೆ. 

ಇಂಧನವನ್ನು ಉಳಿಸದೆ, ಭವಿಷ್ಯದಲ್ಲಿ ಬದುಕಲು ಯಾವುದೇ ಮಾರ್ಗವಿಲ್ಲ. ಉಳಿವಿಗಾಗಿ  ಇಂಧನದ ಸಂರಕ್ಷಣೆ ಅತ್ಯಗತ್ಯ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ  ರಾಜೀವ್ ಪಿ. ನಾಡಿಗ್, ದಯಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಮಹಾವಿದ್ಯಾಲಯದ  ಪ್ರಾಂಶುಪಾಲ ಡಾ. ಬಿ. ಶಿವಕುಮಾರ ಸಂಕ್ಷಿಪ್ತವಾಗಿ  ಇಂಧನದ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಬಗ್ಗೆ ತಿಳಿಸಿದರು.

ಡೀನ್ ಅಕ್ಯಾಡೆಮಿಕ್ ಡಾ.ಎಸ್.ಎಫ್. ಕೊಡದ್, ಪ್ರೊ. ಸಿ.ಎಂ. ಪರಮೇಶ್ವರಪ್ಪ , ಡಾ. ಬಿ. ಮಹೇಶ್ವರಪ್ಪ ಉಪಸ್ಥಿತರಿದ್ದರು.

ಪ್ರೊ. ಸಿ.ಎಂ. ಶ್ವೇತಾ ಸ್ವಾಗತಿಸಿದರು. ಪ್ರೊ. ಸಂತೋಷ್ ರಾಯ್ಕರ್  ವಂದಿಸಿದರು. ಪ್ರೊ. ಭಾವನಾ ಎಸ್. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!